ಹೊನ್ನಾವರ: ಹಿಂದೂ– ಮುಸ್ಲಿಂ ಯುವಕರ ನಡುವೆ ಬುಧವಾರ ತಡರಾತ್ರಿ ನಡೆದ ಘರ್ಷಣೆಯಿಂದಾಗಿ ಪಟ್ಟಣದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಘಟನೆಗೆ ಕಾರಣರಾದ 43 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಶನಿ ದೇವಸ್ಥಾನದ ಸಮೀಪ ಆರಂಭವಾದ ಹಿಂಸಾಚಾರ ಬಳಿಕ ಪಟ್ಟಣದ ಉಳಿದ ಭಾಗಗಳಿಗೂ ವ್ಯಾಪಿಸಿತು. ಹಲವು ಅಂಗಡಿಗಳ ಮೇಲೆ ಕಲ್ಲು ತೂರಲಾಯಿತು. ಉದ್ರಿಕ್ತರು ಟೆಂಪೊ, ಬಸ್ಗಳ ಗಾಜು ಒಡೆದು ದಾರಿಹೋಕರ ಮೇಲೆಯೂ ಹಲ್ಲೆ ನಡೆಸಿದರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಹಿಂದೂ ಯುವಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.