ADVERTISEMENT

‘ಧ್ವಜ ಹಾರಿಸಲು ನಿರ್ಬಂಧವಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 18:12 IST
Last Updated 24 ಏಪ್ರಿಲ್ 2018, 18:12 IST

ಬೆಂಗಳೂರು: ಮನೆಗಳು ಮತ್ತು ಕಟ್ಟಡಗಳ ಮೇಲೆ ಯಾವುದೇ ಧ್ವಜ ಹಾರಿಸಬಹುದು. ಯಾವುದೇ ಪಕ್ಷಗಳ ಬಾವುಟ ಹಾರಿಸಲು ನಿರ್ಬಂಧವಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಒಂದು ಕಟ್ಟಡದ ಮೇಲೆ ನಾಲ್ಕು ಬಾವುಟಗಳನ್ನು ಹಾರಿಸಬಹುದು. ಇದನ್ನು ಚುನಾವಣಾ ವೆಚ್ಚಕ್ಕೆ ಸೇರಿಸುವುದಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ಪಕ್ಷಗಳು ಕಚೇರಿಯಲ್ಲಿ ಆಹಾರ ನೀಡಬಹುದು. ಆದರೆ, ಮತದಾರಿಗೆ ಆಮಿಷ ಒಡ್ಡಲು ಆಹಾರ ವಿತರಿಸುವಂತಿಲ್ಲ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.