ಬೆಂಗಳೂರು: ಎರಡು ದಿನಗಳ ಕಾಲ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳಲ್ಲಿ ತರಬೇತಿ ನಿರತ ಚಾಲಕರ ಸಹಾಯದಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಈಗಾಗಲೇ ಶಾಂತಿನಗರ ನಿಲ್ದಾಣದಿಂದ 5 ಬಸ್ಗಳು ಕೆಂಪೇಗೌಡ ಬಸ್ ನಿಲ್ದಾಣದತ್ತ ಸಂಚಾರ ನಡೆಸಿವೆ.
ಮಂಡ್ಯದಲ್ಲಿ ಕೆಎಸ್ಆರ್ ಟಿ ಬಸ್ ಸಂಚಾರ: ಮದ್ದೂರು ಮಂಡ್ಯ ರೂಟ್ನಲ್ಲಿ ಕೆಎಸ್ಆರ್ ಟಿ ಬಸ್ ಗಳು ಸಂಚಾರ ಆರಂಭಿಸಿವೆ, ಈಗಾಗಲೇ ಸಾರಿಗೆ ನೌಕರರು ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಸಂಚಾರ ಆರಂಭಿಸಿರುವ ಬಸ್ ಗಳಿಗೆ ಪೊಲೀಸರ ಭದ್ರತೆ ಒದಗಿಸಿದ್ದಾರೆ,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.