ADVERTISEMENT

ಪ್ರತ್ಯೇಕ ಅಪಘಾತ ಒಟ್ಟು 8 ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:43 IST
Last Updated 19 ಅಕ್ಟೋಬರ್ 2017, 19:43 IST

ರಾಮನಗರ: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಾಹುಕಾರನ ಪಾಳ್ಯದ ಬಳಿ ಗುರುವಾರ ಹೆದ್ದಾರಿ ಪಕ್ಕದ ಬಸ್‌ ತಂಗುದಾಣದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಬೆಂಗಳೂರಿನ ಐವರು ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ ಗ್ರಾಮದವರಾದ ಕೆಂಪರಾಜು (40), ಅವರ ಮಕ್ಕಳಾದ ಸುಮಾ (7) ಹಾಗೂ ಸಂಜಯ್ (02), ಬೆಂಗಳೂರು ಎಚ್‌ಕೆವಿಕೆ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಾದ ನವನೀತ್‌ ಉಪಾಧ್ಯಾಯ (22) ಹಾಗೂ ಸಾಜನ್‌ಕುಮಾರ್ (22) ಮೃತರು.

ADVERTISEMENT

ಕಾರು ಕೆರೆಗೆ: ತಾಲ್ಲೂಕಿನಮನಗಾನಹಳ್ಳಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು ಕನಕಪುರ ತಾಲ್ಲೂಕಿನ ಗೊಟ್ಟಿಗೆಹಳ್ಳಿ ಗ್ರಾಮದ ಚಿದಾನಂದ (24), ಅವರ ಅಕ್ಕನ ಮಕ್ಕಳಾದ ಶಶಾಂಕ್‌ (6), ಇಂಪನಾ (4) ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.