ADVERTISEMENT

ಪ್ರಶಸ್ತಿ: ಚಿಮ್ಮಲಗಿಗೆ `ದಾನ ಚಿಂತಾಮಣಿ' ರಾಮಸ್ವಾಮಿಗೆ `ಕುಮಾರವ್ಯಾಸ'

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2013, 19:59 IST
Last Updated 16 ಮಾರ್ಚ್ 2013, 19:59 IST

ಬೆಂಗಳೂರು: ಕನ್ನಡ-ಸಂಸ್ಕೃತಿ ಇಲಾಖೆ 2011ನೇ ಸಾಲಿನ `ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ'ಯು ಸೃಜನಶೀಲ ಲೇಖಕಿ ಡಾ. ಸರಸ್ವತಿ ಚಿಮ್ಮಲಗಿ ಅವರಿಗೆ ಸಂದಿದೆ. ಇವರು ಮೂಲತಃ ವಿಜಾಪುರದವರು. ಆದರೆ, ಇವರ ಕಾರ್ಯಕ್ಷೇತ್ರ ಗುಲ್ಬರ್ಗ.

2011ನೇ ಸಾಲಿನ `ಕುಮಾರವ್ಯಾಸ ಪ್ರಶಸ್ತಿ'ಗೆ ಬೆಂಗಳೂರಿನ ಗಮಕಿ ಎಚ್.ಕೆ. ರಾಮಸ್ವಾಮಿ ಅವರು ಆಯ್ಕೆ ಆಗಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಎರಡೂ ಪ್ರಶಸ್ತಿಗಳು ತಲಾ 3 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.