ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಬಲಾ ವಾದಕ ಪುಣೆಯ ಸುರೇಶ್ ತಲ್ವಾಲ್ಕರ್ ಅವರಿಗೆ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಹಾಜರಿದ್ದರು. ಇತರೆ ಪ್ರಶಸ್ತಿ ಪುರಸ್ಕೃತರು: ಬೆಳಕವಾಡಿ ರಾಮಸ್ವಾಮಿ ಅಯ್ಯಂಗಾರ್– ನಿಜಗುಣ ಪುರಂದರ ಪ್ರಶಸ್ತಿ, ಎನ್. ಪುಷ್ಪಮಾಲಾ– ಜಕಣಾಚಾರಿ ಪ್ರಶಸ್ತಿ, ಎಂ.ಶಕುಂತಲಾ– ಶಾಂತಲಾ ನಾಟ್ಯ ಪ್ರಶಸ್ತಿ, ನೇಮಿಚಂದ್ರ– ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರತ್ನಮಾಲಾ ಪ್ರಕಾಶ್– ಸಂತ ಶಿಶುನಾಳ ಷರೀಫ ಪ್ರಶಸ್ತಿ, ಡಾ.ನ. ರತ್ನ– ಬಿ.ವಿ. ಕಾರಂತ ಪ್ರಶಸ್ತಿ (ಮೇಲಿನ ಸಾಲು) ಆರ್. ಪರಮಶಿವನ್– ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ಪೀಟರ್ ಎ. ಲೂಯಿಸ್– ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಕಮಲಮ್ಮ ವಿಠ್ಠಲರಾವ್– ಕುಮಾರವ್ಯಾಸ ಪ್ರಶಸ್ತಿ, ಎಂ.ಎಸ್. ಸಿಂಧೂರ– ಪ್ರೊ.ಕೆ.ಜಿ. ಕುಂದಣಗಾರ ಪ್ರಶಸ್ತಿ, ಜಂಬಣ್ಣ ಅಮರಚಿಂತ– ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಸತ್ತೂರ ಇಮಾಂಸಾಬ್– ಜಾನಪದ ಶ್ರೀ (ಕೆಳಗಿನ ಸಾಲು).