ADVERTISEMENT

ಬಾಲ್ಯವಿವಾಹಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 20:23 IST
Last Updated 30 ಡಿಸೆಂಬರ್ 2015, 20:23 IST

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ನಗರದ ದೊಡ್ಡಪೇಟೆ ಪಂಚಾಚಾರ್ಯ ಸಮುದಾಯ ಭವನದಲ್ಲಿ ಬುಧವಾರ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಓ ಸುನಂದಾ ಅಯ್ಯನಗೌಡ್ರ ತಡೆದಿದ್ದಾರೆ.

ತಾಲ್ಲೂಕಿನ ಕಜ್ಜರಿ ಗ್ರಾಮದ 17 ವರ್ಷದ ಬಾಲಕಿ ಮತ್ತು ಬ್ಯಾಡಗಿ ತಾಲ್ಲೂಕಿನ ಕಳಗೊಂಡ ಗ್ರಾಮದ ಮಂಜುನಾಥ ವಿವಾಹ ನಿಶ್ಚಯವಾಗಿತ್ತು.

ಸುನಂದಾ ಅಯ್ಯನಗೌಡ್ರ ಅವರು ವಧುವಿನ ವಯಸ್ಸಿನ ಬಗ್ಗೆ ಪಾಲಕರನ್ನು ಕೇಳಿದಾಗ ಅವಳಿಗೆ 17 ವರ್ಷ ಎಂಬುದು ಗೊತ್ತಾಗಿದೆ. ಎರಡೂ ಕುಟುಂಬದ ಪಾಲಕರಿಗೆ ತಿಳಿ ಹೇಳಿದ್ದರಿಂದ ವಿವಾಹ ನಡೆಯಲಿಲ್ಲ. ‘ಮಗಳಿಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ’ ಎಂದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.