ADVERTISEMENT

ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:32 IST
Last Updated 25 ಏಪ್ರಿಲ್ 2018, 9:32 IST
ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು
ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ- ಮಗ ಸೇರಿ ಮೂವರ ಸಾವು   

ಕಲಬುರ್ಗಿ: ತಾಲ್ಲೂಕಿನ ಕವಲಗಾ(ಕೆ) ಗ್ರಾಮದಲ್ಲಿ ಸಾರ್ವಜನಿಕ ಬಾವಿ ಸ್ವಚ್ಛತೆಗೆ ಇಳಿದಿದ್ದ ತಂದೆ-ಮಗ ಸೇರಿ ಮೂವರು ಬುಧವಾರ ಮೃತಪಟ್ಟಿದ್ದಾರೆ.

ಚನ್ನಣ್ಣ ಚೌಡಪ್ಪ ಚೌಡಪ್ಪಗೋಳ (59), ಇವರ ಮಗ ಮಲ್ಲಿನಾಥ ಅಲಿಯಾಸ ಮಲ್ಲು (35), ಮಹಿಬೂಬಸಾಬ ನಬಿಸಾಬ ಕೂಡಿ (38) ಮೃತಪಟ್ಟವರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿದೆ. ಹೀಗಾಗಿ ಹಳೆಯ ಕಾಲದ ಸಾರ್ವಜನಿಕ ಬಾವಿಯನ್ನು ಸ್ವಚ್ಛಗೊಳಿಸಲೆಂದು ಇವರು ಬಾವಿಗೆ ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.