ಬೆಂಗಳೂರು: ಪಕ್ಷ ನಿಷ್ಠರನ್ನು ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳಾಗಿ ನೇಮಿಸುವ ಮೂಲಕ ಪಕ್ಷದ ಆಂತರಿಕ ಭಿನ್ನಮತ ತಣಿಸಲು ಬಿಜೆಪಿ ರಾಜ್ಯ ನಾಯಕತ್ವ ಮುಂದಾಗಿದೆ.
ಭಾನುವಾರ ನಡೆಯಲಿರುವ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
‘ಸಂಘಟನೆ ಉಳಿಸಿ’ ಹೆಸರಿನಲ್ಲಿ ಮಾರ್ಚ್ 27ರಂದು ಸಭೆ ಸೇರಿದ್ದ ಬಿಜೆಪಿ ಭಿನ್ನಮತೀಯರ ಗುಂಪು ವಿವಿಧ ಬೇಡಿಕೆಗಳನ್ನು ಪಕ್ಷದ ನಾಯಕರ ಮುಂದಿಟ್ಟಿತ್ತು.
‘ಕೆಜೆಪಿಯಿಂದ ಬಂದ ನಾಯಕರಿಗೆ ಆದ್ಯತೆ ನೀಡುವುದು ಬಿಟ್ಟು ದಶಕಗಳಿಂದ ಪಕ್ಷ ಕಟ್ಟಲು ದುಡಿದವರಿಗೆ ಪಕ್ಷದ ವಿವಿಧ ಸ್ತರಗಳಲ್ಲಿ ಆದ್ಯತೆ ನೀಡಬೇಕು’ ಎಂದೂ ಆಗ್ರಹಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.