ಶಿವಮೊಗ್ಗ: ನಗರಪಾಲಿಕೆ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಅವರ ನಿವಾಸದ ಮೇಲೆ ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಮರಿಯಪ್ಪ ಅವರ ವೆಂಕಟೇಶ್ವರನಗರದ ಮನೆಗೆ ಮಧ್ಯಾಹ್ನ 3ಕ್ಕೆ ಹುಬ್ಬಳ್ಳಿಯಿಂದ ಬಂದ ಎಂಟು ಅಧಿಕಾರಿಗಳು ನಾಲ್ಕು ತಾಸು ಶೋಧ ನಡೆಸಿದರು.
ಮಹತ್ವದ ದಾಖಲೆ, ನಗದು, ಬಂಗಾರದ ಲೆಕ್ಕ ಪಡೆದ ನಂತರ ಅವರ ಸಹೋದರನ ಮನೆಯಲ್ಲೂ ತಪಾಸಣೆ ಕಾರ್ಯ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.