ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಹೈಮಾಂಡ್ಗೆ ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂಬ ಆರೋಪದ ಹಿಂದೆ ಯಡಿಯೂರಪ್ಪ ಮತ್ತು ಅನಂತ್ಕುಮಾರ್ ಅವರ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಪಕ್ಷ ಸೋಮವಾರ ತಿರುಗೇಟು ನೀಡಿದೆ.
ಈ ಕುರಿತಂತೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಅವರು ಯಡಿಯೂರಪ್ಪ ಮತ್ತು ಅನಂತ್ಕುಮಾರ್ ಅವರ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯಲು ಯಡಿಯೂರಪ್ಪ ಮತ್ತು ಅನಂತ್ಕುಮಾರ್ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಂಭಾಷಣೆಯಲ್ಲಿ ಏನಿದೆ?
ಅನಂತ ಕುಮಾರ್: ನೀವಿದ್ದಾಗಲೂ ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೀರಿ! ನಾನು ಕೊಟ್ಟಿದ್ದೀನಿ, ನಾ ಕೊಟ್ಟಿಲ್ಲ ಅಂತ ಹೇಳಲ್ಲ, ಆದರೆ ಸಾವಿರ ಕೋಟಿಲ್ಲ! ಮೊದಲು ಎಷ್ಟು ಕೊಟ್ಟಿದ್ದೀಯಾ ಅಂತಾ ಹೇಳು!
ಯಡಿಯೂರಪ್ಪ: ಕೊಟ್ಟಿರ್ತಾರೆ, ಅದನ್ನು ಬರೆದುಕೊಂಡಿರ್ತಾರಾ?
ಅನಂತಕುಮಾರ್: ನೀವು ಹರಳು ಬೀಸಿದರೆ ಹತ್ತಿಕೊಳ್ಳುತ್ತೆ! ಸಾವಿರ ಕೋಟಿ ಕೊಟ್ಟಿದ್ದಾರೆ ಅಂದ್ರೆ ಯಾರು ಒಪ್ಪಿಕೊಳ್ಳಲ್ಲ ಆದ್ರೆ ಕೊಟ್ಟಿದ್ದಾರೆ ಅಂತಲೇ ಒಪ್ಪಿಕೊಳ್ಳೊದು..
ಯಡಿಯೂರಪ್ಪ : ಡೈರಿ ಈಚೆಗೆ ಬಂದಿಲ್ಲವಲ್ಲಾ
ಅನಂತಕುಮಾರ್: ಎಲೆಕ್ಷನ್ ತನಕ ಉತ್ತರ ಕೊಟ್ಟುಕೊಳ್ಳುತ್ತಾ ತಿರುಗಬೇಕಾಗುತ್ತೆ, ತಿರುಗಲಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.