ಬಳ್ಳಾರಿ: ರೌಡಿಶೀಟರ್ ಹಾಗೂ ಬಿಜೆಪಿ ಜಿಲ್ಲಾ ಪರಿಶಿಷ್ಟ ಪಂಗಡ ಮೋರ್ಚಾ ಘಟಕದ ಉಪಾಧ್ಯಕ್ಷ ಬಂಡಿ ರಮೇಶ್(40) ಅವರನ್ನು ತಾಲ್ಲೂಕಿನ ಗುಗ್ಗರಹಟ್ಟಿಯಲ್ಲಿ ಗುರುವಾರ ಸುಮಾರು ಹತ್ತು ಮಂದಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ಮಧ್ಯಾಹ್ನ 3.30ರ ವೇಳೆಗೆ ಹೋಟೆಲ್ನಲ್ಲಿ ಮಾಡುತ್ತಿದ್ದ ರಮೇಶ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ, ತಲೆ ಕೊಚ್ಚಿ ಹಾಕಿದ್ದಾರೆ. ಕೊಲೆ ಮಾಡಿದವರು ಯಾರು? ಕೊಲೆಗೆ ಕಾರಣವೇನು? ಎಂಬುದು ಪತ್ತೆಯಾಗಿಲ್ಲ ಎಂದು ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ರಮೇಶ್, ಬಳ್ಳಾರಿ ನಗರಸಭೆ ಮಾಜಿ ಸದಸ್ಯ ಬಂಡಿ ವೆಂಕಟೇಶ್ ಸಹೋದರ. ಬಿಜೆಪಿ ಜಿಲ್ಲಾ ಪರಿಶಿಷ್ಟ ಪಂಗಡ ಮೋರ್ಚಾ ಘಟಕದ ಉಪಾಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿದ್ದರು.
ದ್ವೇಷ ಕಾರಣ?: ರಾಜಕೀಯ ಕಾರಣಗಳಿಗಿಂತ, ರೌಡಿಶೀಟರ್ಗಳ ನಡುವಿನ ವೈಷ್ಯಮ್ಯದ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
2015ರಲ್ಲಿ ನಗರದ ರೈಲು ನಿಲ್ದಾಣದಲ್ಲಿ ನಡೆದಿದ್ದ ಮತ್ತೊಬ್ಬ ರೌಡಿಶೀಟರ್ ಉರುಕುಂದ ಅವರ ಕೊಲೆ ಪ್ರಕರಣದ ಆರೋಪ ರಮೇಶ್ ಮೇಲಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.