ADVERTISEMENT

ಲಕ್ಷ್ಮೀನಾರಾಯಣ ವಿಗ್ರಹ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2014, 20:13 IST
Last Updated 27 ಜನವರಿ 2014, 20:13 IST
ಲಕ್ಷ್ಮೀ ನಾರಾಯಣ ವಿಗ್ರಹ
ಲಕ್ಷ್ಮೀ ನಾರಾಯಣ ವಿಗ್ರಹ   

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಲಸಿ ಗ್ರಾಮದ ರಾಮೇಶ್ವರ ದೇವಸ್ಥಾನದ ಜೀರ್ಣೋ­ದ್ಧಾರ ಹಾಗೂ ಉತ್ಖನನದ ಸಮಯ­ದಲ್ಲಿ ಕದಂಬರ ಕಾಲದ (11ನೇ ಶತ­ಮಾನ) ಏಕಶಿಲೆಯ ನಾಲ್ಕು ಅಡಿ ಎತ್ತರದ ಲಕ್ಷ್ಮೀ ನಾರಾಯಣ ವಿಗ್ರಹ­ವೊಂದು ಭಾನುವಾರ ಪತ್ತೆಯಾಗಿದೆ. 

ಭೂವರಾಹ ನರಸಿಂಹ ದೇವ­ಸ್ಥಾನದ ಬಳಿಯಿರುವ ರಾಮೇಶ್ವರ ಮಂದಿರದ ಆವರಣದಲ್ಲಿ ಈ  ವಿಗ್ರಹ ದೊರೆತಿದೆ. ಇದನ್ನು ಪರೀಕ್ಷಿಸಿದ ಇತಿಹಾಸ ಸಂಶೋಧಕ ಡಾ.ಬಾಹುಬಲಿ ಹಂದೂರ ಅವರು ‘ಇದು ಕದಂಬರ ಕಾಲ­ದಲದಲ್ಲಿ ಕೆತ್ತಿದ  ವಿಗ್ರಹ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.