ADVERTISEMENT

ವಿಧವೆ ಮೇಲೆ ಆಸಿಡ್‌ ದಾಳಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಲಿಂಗಸುಗೂರು (ರಾಯಚೂರು ಜಿಲ್ಲೆ): ಇಲ್ಲಿನ ಜನತಾ ಕಾಲೊನಿಯಲ್ಲಿ ಬಹಿರ್ದೆಸೆಗೆ ಹೋಗಿಬರುತ್ತಿದ್ದ ವಿಧವೆ ಮೇಲೆ ಭಾನುವಾರ ರಾತ್ರಿ ಆಸಿಡ್‌ ದಾಳಿ ನಡೆದಿದೆ.

ಮುಸುಕುಧಾರಿಗಳ ಗುಂಪು ಕಿರಣಿ ವ್ಯಾಪಾರ ಮಾಡುವ ಶರಣಮ್ಮ ಸಂಗಣ್ಣ ಗಂಟೇರ್‌ (30) ಅವರ ತಲೆಗೆ ಬಡಿಗೆಯಿಂದ ಹೊಡೆದು, ಆಸಿಡ್‌ ಎರಚಿ ಕೊಲೆ ಮಾಡಲು ಯತ್ನಿಸಿದೆ. ಆಸಿಡ್‌ ದಾಳಿಯಿಂದ ಅವರ ಮುಖ ಹಾಗೂ ದೇಹದ ಕೆಲವು ಕಡೆ ಸುಟ್ಟ ಗಾಯವಾಗಿದ್ದು, ರಾಯಚೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

ADVERTISEMENT

ಪಟ್ಟಣದಲ್ಲಿ ಕೆಲವು ತಿಂಗಳ ಹಿಂದೆ ಮನೆಗೆ ಹೋಗುತ್ತಿದ್ದ ಮಹಿಳೆಯ ಕೆನ್ನೆ ಕಚ್ಚಿದ ಘಟನೆ ನಡೆದಿತ್ತು. ಈಗ ಆಸಿಡ್‌ ದಾಳಿ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.