ಮೈಸೂರು: ಬೆಂಗಳೂರಿನ ಶ್ರೀರಾಮ ಲಲಿತಕಲಾ ಮಂದಿರವು ಮೈಸೂರಿನ ಸಂಗೀತ ವಿದ್ವಾಂಸ ಪ್ರೊ.ಆರ್.ವಿಶ್ವೇಶ್ವರನ್ ಅವರನ್ನು ‘ಸಂಗೀತ ವೇದಾಂತ ಧುರೀಣ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ₹ 1 ಲಕ್ಷ ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. ನಗರದಲ್ಲಿ ನ. 24ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೈಸೂರಿನ 32 ಹಿರಿಯ ಕಲಾವಿದರಿಗೆ ‘ಸಂಗೀತ ಕಲಾಸುಮ’ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ₹ 10,000 ನಗದು ಒಳಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.