ಕಾರವಾರ: ವೃದ್ಧಾಪ್ಯ ಪ್ರಮಾಣ ಪತ್ರಕ್ಕೆ ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಲಕ್ಷ್ಮೀ ನಾರಾಯಣ ಹೆಗಡೆ ಎಸಿಬಿ ಬಲೆಗೆ ಸಿಲುಕಿದರು.
ಜಿಲ್ಲೆಯ ಭಟ್ಕಳ ತಾಲ್ಲೂಕಿನ ಆರು ಮಂದಿ ವೃದ್ಧರಲ್ಲಿ ನರ್ಸ್ ಲಂಚ ಕೇಳಿದ್ದರು.
ವೃದ್ಧಾಪ್ಯ ಪ್ರಮಾಣ ಪತ್ರ ಕೊಡಲು ತಲಾ ₹500 ಲಂಚ ನೀಡುವಂತೆ ಕೇಳಿದ್ದರು.
ಸೋಮವಾರ ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ₹2 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.