ADVERTISEMENT

ಶಾಬಂದ್ರಿ ಕುಟುಂಬ ಇಂದು ಭಟ್ಕಳಕ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ಭಟ್ಕಳ (ಉತ್ತರ ಕನ್ನಡ): ಯೆಮನ್‌ನಲ್ಲಿ ಕೆಲವು ದಿನಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿಯ ಆಜಾದ್‌ ನಗರದ ಮೊಹಮ್ಮದ್‌ ಯೂನುಸ್‌ ಶಾಬಂದ್ರಿ ಕುಟುಂಬದವರು ತಾಯ್ನಾಡಿಗೆ ಹೊರಟಿದ್ದು, ಗುರುವಾರ ಇಲ್ಲಿಗೆ ತಲುಪುವ ನಿರೀಕ್ಷೆಯಿದೆ.

ಮಂಗಳವಾರ ತಡರಾತ್ರಿ ಶಾಬಂದ್ರಿ ಕುಟುಂಬದ ಆರು ಜನ ಸೇರಿದಂತೆ ದೇಶದ ವಿವಿಧೆಡೆಯ ಜನರನ್ನು ಭಾರತ ನೌಕಾಪಡೆಯ ಹಡಗಿನಲ್ಲಿ ಆಫ್ರಿಕಾದ ಬಂದರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

‘ಆಫ್ರಿಕಾದ ಕಾಲಮಾನದ ಪ್ರಕಾರ ಬುಧವಾರ ಸಂಜೆ 4ಗಂಟೆಗೆ ನಾವು ವಿಮಾನದ ಮೂಲಕ ಮುಂಬೈಗೆ ಹೊರಟಿದ್ದು, ಗುರುವಾರ ರಾತ್ರಿ ಎಲ್ಲರೂ ಭಟ್ಕ ಳಕ್ಕೆ ಬರಲಿದ್ದೇವೆ’ ಎಂದು ಮೊಹಮ್ಮದ್‌ ಯೂನುಸ್‌ ಶಾಬಂದ್ರಿ ಅವರು ಭಟ್ಕಳ ದಲ್ಲಿರುವ ಪಾಲಕರಿಗೆ ಮಾಹಿತಿ ನೀಡಿದ್ದಾರೆ.

‘ಆ ಅಲ್ಲಾಹನೇ ನನ್ನ ಕುಟುಂ ಬವನ್ನು ಕಾಪಾಡಿದ್ದಾನೆ. ನಮ್ಮ ಮನವಿ ಪರಿಗಣಿಸಿ, ಸರಿಯಾದ ಸಮಯಕ್ಕೆ ಹಡಗು ಕಳುಹಿಸಿ, ನಮ್ಮ ಕುಟುಂಬವನ್ನು ಕಾಪಾಡಿದ್ದಕ್ಕೆ ಭಾರತ ಸರ್ಕಾರಕ್ಕೆ ನಾವು  ಕೃತಜ್ಞತೆ ಸಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.