ADVERTISEMENT

ಸಾಕ್ಷಿ ಮಲ್ಲಿಕ್‌ ಸೇರಿ ಐವರಿಗೆ ‘ಚುಂಚಶ್ರೀ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST

ನಾಗಮಂಗಲ: ಆದಿಚುಂಚನಗಿರಿ ಮಠ ನೀಡುವ ‘ಚುಂಚಶ್ರೀ ಪ್ರಶಸ್ತಿಗೆ’ ಐವರು ಆಯ್ಕೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರಕ್ಕಾಗಿ ಬೆಂಗಳೂರಿನ ಮಾಲತಿ ಹೊಳ್ಳ ಮತ್ತು ಹರಿಯಾಣದ ಸಾಕ್ಷಿ ಮಲ್ಲಿಕ್, ಜಾನಪದ ಕ್ಷೇತ್ರಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಸುಕ್ರಿ ಬೊಮ್ಮಗೌಡ, ಪ್ರವಚನ ಕ್ಷೇತ್ರಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಶಿವರಾಮ ಅಗ್ನಿಹೋತ್ರಿ ಹಾಗೂ ಸಾಹಿತ್ಯ ಕ್ಷೇತ್ರಕ್ಕಾಗಿ ತುಮಕೂರಿನ ಡಾ.ಡಿ.ಕೆ.ರಾಜೇಂದ್ರ ಆಯ್ಕೆಯಾಗಿದ್ದಾರೆ. ತಲಾ ₹ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಮಠದಲ್ಲಿ ಸೆ. 24ರಂದು ನಡೆಯುವ ರಾಜ್ಯಮಟ್ಟದ ಕಾಲಭೈರವೇಶ್ವರ ಸ್ವಾಮಿ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ..

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.