ADVERTISEMENT

ಸಾಹಿತ್ಯ ಸಮ್ಮೇಳನ; ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2015, 19:30 IST
Last Updated 5 ಜನವರಿ 2015, 19:30 IST
ಸಾಹಿತ್ಯ ಸಮ್ಮೇಳನ; ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ
ಸಾಹಿತ್ಯ ಸಮ್ಮೇಳನ; ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ   

ಹಾಸನ: ಶ್ರವಣಬೆಳಗೊಳದಲ್ಲಿ ಫೆ. 1ರಿಂದ 3ರವರೆಗೆ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಹೊಯ್ಸಳ ಸಿರಿ’ಗೆ ಲೇಖನಗಳನ್ನು ಆಹ್ವಾನಿಸಲಾಗಿದೆ.

ಲೇಖಕರು ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದ 600 ಪದಗಳಿಗೆ ಕಡಿಮೆ ಇಲ್ಲದ ನುಡಿ ತಂತ್ರಾಂಶದಲ್ಲಿ ಟೈಪ್‌ ಮಾಡಿರುವ ಬರಹಗಳನ್ನು hoysalasirisanchike@gmail.comಗೆ ಮೇಲ್ ಮಾಡಬಹುದು. ಲೇಖನದ ನಕಲು ಪ್ರತಿಯನ್ನು ಅಂಚೆಯ ಮೂಲಕ ಸಂಪಾದಕರು, ಹೊಯ್ಸಳ ಸಿರಿ ಸ್ಮರಣ ಸಂಚಿಕೆ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನ, ಹಾಸನ –ಇಲ್ಲಿಗೆ ಕಳುಹಿಸಿಕೊಡಬೇಕು.

ಬರಹಗಳ ಜೊತೆ ಲೇಖಕರ ಸಂಕ್ಷಿಪ್ತ ಪರಿಚಯ, ಭಾವಚಿತ್ರ, ಸಂಪರ್ಕ ಸಂಖ್ಯೆ ಹಾಗೂ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.
ಬರಹಗಳನ್ನು ಸ್ವೀಕರಿಸಲು ಜ. 12 ಕೊನೆಯ ದಿನ. ಬರಹಗಳ ಆಯ್ಕೆ ಬಗ್ಗೆ ಸಂಪಾದಕ ಮಂಡಳಿಯ ತೀರ್ಮಾನವೇ ಅಂತಿಮ. ಈ ಕುರಿತು ಯಾವುದೇ ಪತ್ರ ಅಥವಾ ದೂರವಾಣಿ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ’ ಎಂದು ಸಾಹಿತ್ಯ ಪರಿಷತ್‌ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಲ್‌. ಜನಾರ್ದನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.