ADVERTISEMENT

ಸ್ನಾನ ಮಾಡುತ್ತಿದ್ದ ಕುರಿಗಾಹಿ ಮೊಸಳೆಗೆ ಬಲಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 20:05 IST
Last Updated 28 ಮಾರ್ಚ್ 2017, 20:05 IST
ಸ್ನಾನ ಮಾಡುತ್ತಿದ್ದ ಕುರಿಗಾಹಿ ಮೊಸಳೆಗೆ ಬಲಿ
ಸ್ನಾನ ಮಾಡುತ್ತಿದ್ದ ಕುರಿಗಾಹಿ ಮೊಸಳೆಗೆ ಬಲಿ   

ಶಹಾಪುರ: ಕೃಷ್ಣಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ತಾಲ್ಲೂಕಿನ ತುಮಕೂರ ಗ್ರಾಮದ ಮರೆಪ್ಪ ಹಣಮಂತ ಇಡ್ಲೂರ (50) ಎಂಬವರನ್ನು ಮೊಸಳೆ ದಾಳಿ ಮಾಡಿ, ಎಳೆದುಕೊಂಡು ಹೋಗಿದೆ.

ಕುರಿ ಮೇಯಿಸಲು ಮರೆಪ್ಪ ಹಾಗೂ ಹೊನ್ನಪ್ಪ ಕೃಷ್ಣಾ ನದಿ ತಟಕ್ಕೆ ಮಂಗಳವಾರ ಬಂದಿದ್ದರು.

‘ಬಿಸಿಲಿನ  ಪ್ರಖರತೆ ಹೆಚ್ಚಿದ್ದರಿಂದ ಮರೆಪ್ಪ ನದಿಗೆ ಇಳಿದು ಸ್ನಾನ ಮಾಡುತ್ತಿದ್ದ. ಅವನ ಪಕ್ಕದಲ್ಲಿಯೇ ನಾನು ನಿಂತಿದ್ದೆ. ಮೊಸಳೆ ದಾಳಿ ಮಾಡಿ ಅವನನ್ನು ಸೆಳೆದುಕೊಂಡು ಹೋಯಿತು. ತಕ್ಷಣ  ಕೈ ಹಿಡಿದು ಜಗ್ಗಿದೆ. ಆದರೆ ಮೊಸಳೆಯ ಬಿಗಿ ಹಿಡಿತಕ್ಕೆ ಮರೆಪ್ಪ ನೀರಿನಲ್ಲಿ ಮುಳಗಿ ಹೋದ’ ಎಂದು ಹೊನ್ನಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.