ADVERTISEMENT

‘ಕೈಮಗ್ಗ ರಕ್ಷಣೆ ಕಾನೂನು ಜಾಗೃತಿಗೆ ನಿರಶನ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2014, 19:30 IST
Last Updated 30 ಜನವರಿ 2014, 19:30 IST
ಸತ್ಯಾಗ್ರಹದಲ್ಲಿ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಮಾತನಾಡಿದರು. ಗುಂಡಣ್ಣ, ಅಗ್ರಹಾರ ಕೃಷ್ಣಮೂರ್ತಿ, ನಾ.ಡಿಸೋಜ, ಕಡಿದಾಳು ಶಾಮಣ್ಣ, ಸವಿತಾ ನಾಗಭೂಷಣ್, ಗೀತಾರಾವ್‌ ಉಪಸ್ಥಿತರಿದ್ದರು
ಸತ್ಯಾಗ್ರಹದಲ್ಲಿ ರಂಗಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಮಾತನಾಡಿದರು. ಗುಂಡಣ್ಣ, ಅಗ್ರಹಾರ ಕೃಷ್ಣಮೂರ್ತಿ, ನಾ.ಡಿಸೋಜ, ಕಡಿದಾಳು ಶಾಮಣ್ಣ, ಸವಿತಾ ನಾಗಭೂಷಣ್, ಗೀತಾರಾವ್‌ ಉಪಸ್ಥಿತರಿದ್ದರು   

ಶಿವಮೊಗ್ಗ: ಕೈಮಗ್ಗ ನೇಕಾರಿಕೆ ಉಳಿಸಲು ಸರ್ವೋ­ದಯ ದಿನದಂದು ಹೆಗ್ಗೋಡು ಸಮೀಪದ ಹೊನ್ನೆ­ಸರದ ಚರಕದ ಶ್ರಮಜೀವಿ ಆಶ್ರಮದಲ್ಲಿ ರಂಗ­ಕರ್ಮಿ ಹಾಗೂ ಚರಕ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಅನಿ­ರ್ದಿ­ಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಪ್ರಸನ್ನ ಜತೆ ಚರಕ ಸಂಸ್ಥೆಯ ಕಾರ್ಮಿ­ಕರು ಹಾಗೂ ನೇಕಾರರ ಪರ ಕೆಲಸ ಮಾಡುತ್ತಿರುವ ದೊಡ್ಡ­­­ಬಳ್ಳಾ­ಪುರದ ನರಸಿಂಹಮೂರ್ತಿ, ಬೆಂಗಳೂ­ರಿನ ಸುನೀತಾ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.

ಪ್ರಸನ್ನ ಮಾತನಾಡಿ, ‘ಉಪವಾಸ ಕೈ ಬಿಡಿ ಎಂದು ಸರ್ಕಾರದ ಹಲವು ಅಧಿ­ಕಾರಿ­ಗಳು, ರಾಜಕಾರಣಿಗಳು, ಸಾಹಿತಿ­ಗಳು, ಕಲಾವಿದರು ತಮ್ಮ ಜತೆ ಮಾತ­ನಾ­ಡುತ್ತಿದ್ದಾರೆ. ಎಲ್ಲರಿಗೂ ಸಮಸ್ಯೆ ಬಗೆ­ಹ­ರಿಸುವ ಬಗ್ಗೆ ಪ್ರಾಮಾಣಿಕ­ವಾದ ಆಸಕ್ತಿ ಇದೆ. ಆದರೆ, ಯಾರಿಗೂ ಕೈಮಗ್ಗ ನೇಕಾರರ ಸಮಸ್ಯೆ ಅರ್ಥವಾ­ಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಕೈಮಗ್ಗ ಕ್ಷೇತ್ರಕ್ಕೆ ಕಾನೂನಿನ ಬೆಂಬಲ ಇದೆ ಎಂಬುದೇ ಇವರಿಗೆ ತಿಳಿದಿಲ್ಲ. ‘ಕೈಮಗ್ಗ ಮೀಸಲಾತಿ ಅಧಿನಿಯಮ–1985’ ಪ್ರಕಾರ ವಿದ್ಯುತ್‌ ಮಗ್ಗ ಬಳಕೆ ಮಾಡು­ವುದು ಕಾನೂನುಬಾಹಿರ. ಆದರೆ, ಸರ್ಕಾರವೇ ಈ ಕಾನೂನನ್ನು ಮುರಿ­ದಿದೆ’ ಎಂದು ದೂರಿದರು.

ಸತ್ಯಾಗ್ರಹಕ್ಕೆ ಸಾಹಿತಿ ನಾ.ಡಿಸೋಜ ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು. ವಿಮ­ರ್ಶಕ ಡಿ.ಎಸ್‌.ನಾಗ­ಭೂಷಣ್, ಚರಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಗೌರಮ್ಮ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.

ಮೈಸೂರು ವರದಿ: ನೇಕಾರರ ಹೋರಾ­ಟ­ವನ್ನು ಬೆಂಬಲಿಸಿ ಮೈಸೂರಿ­ನಲ್ಲಿ  ದೇಸಿ ಬಳಗ ಮೈಸೂರು ಸಂಘ­ಟನೆಯ ಕಾರ್ಯಕರ್ತರು ಮಾನಸ­ಗಂಗೋ­ತ್ರಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಗುರುವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.