ಬೆಂಗಳೂರು: ಕನ್ನಡದ ವಿಶಿಷ್ಟ ಅಂತರ್ಜಾಲ ತಾಣ ಚುಕ್ಕುಬುಕ್ಕು ಅಂಕಿತ ಪುಸ್ತಕದ ಸಹಯೋಗದೊಂದಿಗೆ ಮುಖಪುಟ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದೆ.
ಮುಖಪುಟ ರಚಿಸಬೇಕಾಗಿರುವ ಪುಸ್ತಕ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಸುನೀತ ಭಾವ’. ಸ್ಪರ್ಧೆಯಲ್ಲಿ ಆಯ್ಕೆಯಾದ ಒಂದು ಅತ್ಯುತ್ತಮ ವಿನ್ಯಾಸಕ್ಕೆ ರೂ 5,000 ಬಹುಮಾನದ ಜತೆಗೆ ಮುಂದಿನ ತಿಂಗಳು ಪ್ರಕಟವಾಗಲಿರುವ ‘ಸುನೀತ ಭಾವ’ ಪುಸ್ತಕದ ಮುಖಪುಟವಾಗುವ ಗೌರವ ವೂ ಸಂದಲಿದೆ. ವಿನ್ಯಾಸ ತಲುಪಲು ಕಡೆಯ ದಿನಾಂಕ ಏಪ್ರಿಲ್ 12. ವಿನ್ಯಾಸ ಕಳಿಸಿಕೊಡಬೇಕಾದ ಇ-ಮೇಲ್ ವಿಳಾಸ: chukkumail@gmail.com ಸ್ಪರ್ಧೆಯ ನಿಯಮಗಳಿಗಾಗಿ www. chukkubukku.comಗೆ ಭೇಟಿ ನೀಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.