ADVERTISEMENT

ಅದಾನಿ ಗ್ರೂಪ್: ಕಲ್ಲಿದ್ದಲು ಗಣಿಗಾರಿಕೆ ಕೈಬಿಡದಿದ್ದರೆ ಗುಜರಾತ್‌ಗೆ ಬಂದು ಪ್ರತಿಭಟನೆ– ಕ್ರಿಕೆಟಿಗ ಚಾಪೆಲ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 16:39 IST
Last Updated 19 ಮಾರ್ಚ್ 2017, 16:39 IST
ಅದಾನಿ ಗ್ರೂಪ್: ಕಲ್ಲಿದ್ದಲು ಗಣಿಗಾರಿಕೆ ಕೈಬಿಡದಿದ್ದರೆ ಗುಜರಾತ್‌ಗೆ ಬಂದು ಪ್ರತಿಭಟನೆ– ಕ್ರಿಕೆಟಿಗ ಚಾಪೆಲ್‌ ಎಚ್ಚರಿಕೆ
ಅದಾನಿ ಗ್ರೂಪ್: ಕಲ್ಲಿದ್ದಲು ಗಣಿಗಾರಿಕೆ ಕೈಬಿಡದಿದ್ದರೆ ಗುಜರಾತ್‌ಗೆ ಬಂದು ಪ್ರತಿಭಟನೆ– ಕ್ರಿಕೆಟಿಗ ಚಾಪೆಲ್‌ ಎಚ್ಚರಿಕೆ   

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಅದಾನಿ ಗ್ರೂಪ್ ಕಂಪೆನಿ ಕಲ್ಲಿದ್ದಲು ಗಣಿಗಾರಿಕೆ ನಡೆಸುವುದಕ್ಕೆ  ಆಸ್ಟ್ರೇಲಿಯಾ ಕ್ರಿಕೆಟಿಗರಾದ ಇಯಾನ್‌ ಚಾಪೆಲ್‌ ಮತ್ತು  ಗ್ರೆಗ್‌ ಚಾಪೆಲ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಕ್ವಿನ್ಸ್‌ಲ್ಯಾಂಡ್‌ನಲ್ಲಿ ಅದಾನಿ ಗ್ರೂಪ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಿದ್ದು ಇದಕ್ಕೆ ಆಸ್ಟ್ರೇಲಿಯಾ ಸರ್ಕಾರ ಒಪ್ಪಿಗೆ ನೀಡಿದೆ.
ಇಲ್ಲಿ ಗಣಿಗಾರಿಕೆ ನಡೆಸುವುದರಿಂದ ಪರಿಸರಕ್ಕೆ ಹಾನಿ ಉಂಟಾಗುವುದಲ್ಲದೆ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. 

ಕೂಡಲೇ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಚಾಪೆಲ್‌ ಸಹೋದರರು, ಸಂಗೀತಗಾರರು, ರಾಜಕಾರಣಿಗಳು, ಬರಹಗಾರರು ಮತ್ತು ಪರಿಸರ ಹೋರಾಟಗಾರರು ಸೇರಿದಂತೆ 90ಕ್ಕೂ ಹೆಚ್ಚು ಜನರು ಅದಾನಿ ಗ್ರೂಪ್‌ಗೆ ಪತ್ರ ಬರೆದಿದ್ದಾರೆ.

ADVERTISEMENT

ಒಂದು ವೇಳೆ ಕಲ್ಲಿದ್ದಲು ಗಣಿಗಾರಿಕೆಯನ್ನು ನಿಲ್ಲಿಸದೇ ಹೋದಲ್ಲಿ  ಗುಜರಾತ್‌ಗೆ ಬಂದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಕಾಳಜಿ ವಹಿಸದೇ ಗಣಿಗಾರಿಕೆಗೆ ಪರವಾನಿಗೆ ನೀಡಿರುವುದನ್ನು ಪತ್ರದಲ್ಲಿ ಖಂಡಿಸಲಾಗಿದೆ.

ತೊಂದರೆಯಾಗಲ್ಲ?
ಕಲ್ಲಿದ್ದಲು ಗಣಿಗಾರಿಕೆಯಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಅದಾನಿ ಗ್ರೂಪ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.