ADVERTISEMENT

ಭಂಡಾರ ನಾಯಕೆ ವಿಮಾನ ನಿಲ್ದಾಣ ಮೂರು ತಿಂಗಳು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST

ಕೊಲಂಬೊ(ಪಿಟಿಐ): ಇಲ್ಲಿನ ಭಂಡಾರ ನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ದುರಸ್ತಿ ಕಾರಣ ಮುಂದಿನ ವರ್ಷದ ಜನವರಿ ಯಿಂದ ಮೂರು ತಿಂಗಳು ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಿಗೆ ವಿಮಾನಸೇವೆ ಸ್ಥಗಿತಗೊಳ್ಳಲಿದೆ.

ಚೆನ್ನೈ, ಕೊಚ್ಚಿ ಮತ್ತು ತಿರುಚ್ಚಿ ನಗರಗಳಿಗೂ ವಿಮಾನಗಳ ಹಾರಾಟ ನಡೆಯುವುದಿಲ್ಲ ಎಂದು ಶ್ರೀಲಂಕಾ ಏರ್‌ಲೈನ್ಸ್‌ ಶನಿವಾರ ತಿಳಿಸಿದೆ. ಇದಲ್ಲದೆ ಸಿಂಗಪುರ ಮತ್ತು ಮಾಲೆ ನಗರಗಳಿಗೂ ಭಂಡಾರ ನಾಯಕೆ  ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ರದ್ದುಪಡಿಸಲಾಗುವುದು.

ರನ್‌ವೇ ದುರಸ್ತಿಯಿಂದ  ವಿಮಾನ ಹಾರಾಟಕ್ಕೆ ತೊಂದರೆ ಆಗಲಿದೆ.  ಆದ್ದರಿಂದ ಪ್ರತಿದಿನ ಬೆಳಿಗ್ಗೆ 8.30ರಿಂದ ಸಂಜೆ 4.30ರವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.