ADVERTISEMENT

ಸೋಮವಾರ, 10–4–1967

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 19:30 IST
Last Updated 9 ಏಪ್ರಿಲ್ 2017, 19:30 IST
ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆ ಖಚಿತ
ನವದೆಹಲಿ, ಏ. 9– ರಾಷ್ಟ್ರಪತಿಯಾಗಿ ತಮ್ಮ ಪ್ರಸ್ತುತ ಅಧಿಕಾರಾವಧಿ ಮುಗಿದ ನಂತರ ತಾವು ನಿವೃತ್ತಿ ಹೊಂದುವುದಾಗಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್‌ರವರು ಇಂದು ಇಲ್ಲಿ ಪ್ರಕಟಿಸಿದರು.
 
ರಾಷ್ಟ್ರದ ಎರಡು ಅತ್ಯುನ್ನತ ಸ್ಥಾನಗಳಿಗೆ  ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಘಟನಾವಳಿಗಳು ಸಂತೋಷಕರವಾದುದಲ್ಲವೆಂದು ಡಾ. ರಾಧಾಕೃಷ್ಣನ್‌ರವರು ತಿಳಿಸಿ, ಈ ಚಳವಳಿಗಳು ತಮ್ಮ ನಿವೃತ್ತಿಯ ನಿರ್ಧಾರವನ್ನು ಬಲಗೊಳಿಸಿವೆಯೆಂದು ಹೇಳಿದ್ದಾರೆ.
 
ಜಾಕಿರ್ ಹುಸೇನ್ ಕಾಂಗ್ರೆಸ್ ಅಭ್ಯರ್ಥಿ
ನವದೆಹಲಿ, ಏ. 9– ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿ ಡಾ. ಜಾಕಿರ್ ಹುಸೇನ್, ಉಪರಾಷ್ಟ್ರಪತಿ ಸ್ಥಾನಕ್ಕೆ ಮೈಸೂರಿನ ರಾಜ್ಯಪಾಲ ಶ್ರೀ ವಿ.ವಿ. ಗಿರಿ ಎಂದು ನಂಬಲರ್ಹ ಮೂಲಗಳಿಂದ ಇಂದು ಮಧ್ಯರಾತ್ರಿಯ ನಂತರ ತಿಳಿದು ಬಂದಿತು. ನಾಳೆ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಸಭೆಯಾದ ನಂತರ ಈ ಬಗೆಗೆ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ.
 
‘ಒಂದೆರಡು ತಿಂಗಳಲ್ಲಿ ರಾಜ್ಯ ಸರ್ಕಾರದ ಪತನ’
ಬೆಂಗಳೂರು, ಏ. 9– ಮೇ ತಿಂಗಳಿನಲ್ಲಿ ಆರಂಭವಾಗುವ ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಮೈಸೂರಿನ ಕಾಂಗ್ರೆಸ್ ಸರ್ಕಾರದ ಪತನವಾಗುತ್ತದೆ ಎಂದು ಶ್ರೀ ವಾಟಾಳ್ ನಾಗರಾಜ್ ಅವರು ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.