ADVERTISEMENT

ಅಭಯ ನೀಡಲಿ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಕರ್ನಾಟಕ ಗೃಹ ಮಂಡಳಿಯು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ನಿರ್ಮಿಸಿದ ಫ್ಲಾಟುಗಳ ಹಂಚಿಕೆಗೆ ಸಾರ್ವಜನಿಕ ಪ್ರಕಟಣೆ (ಪ್ರ.ವಾ., ಮೇ 6) ನೀಡಿದೆ.

ಹಿಂದೆಲ್ಲ ಇಂತಹುದೇ ಚಿತ್ತಾಕರ್ಷಕ ಪ್ರಕಟಣೆಗಳನ್ನು ನೀಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ್ದ ಸೈಟುಗಳನ್ನು ಪಡೆದು ಮನೆ ಕಟ್ಟಿಕೊಂಡು, ಜನ್ಮ ಸಾರ್ಥಕವಾಯಿತು ಎಂದುಕೊಂಡಿದ್ದ ಅನೇಕರು ‘ಹರ ಕೊಲ್ಲಲ್ ಪರ ಕಾಯ್ವನೇ’ ಎಂದುಕೊಳ್ಳುತ್ತಾ ನಿಡುಸುಯ್ಯುತ್ತಿದ್ದಾರೆ.

ಆದ್ದರಿಂದ ಇನ್ನು ಮುಂದೆ ಇಂತಹ ಪ್ರಕಟಣೆಗಳನ್ನು ಯಾರೇ ಕೊಡುವುದಿದ್ದರೂ ಅದರಲ್ಲಿ ‘ಈ ಜಾಗವು ಕೆರೆಯಂಗಳ, ಗೋಮಾಳ, ಅರಣ್ಯ, ಹಸಿರುಪಟ್ಟಿ, ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿದ್ದಲ್ಲ’ ಎಂಬ ಘೋಷಣೆಯನ್ನು ಸೇರಿಸಿ, ಫಲಾನುಭವಿಗಳಿಗೆ ಅಭಯ ನೀಡಬೇಕು.
ಕರಿಯಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.