‘ಗುರುವ ಕೊರಗ: ಕರಾವಳಿಯ ನಿಜ ಮಾದರಿ’ (ಪ್ರ.ವಾ., ಏ.14) ಲೇಖನ ಸಕಾಲಿಕ. ಭಾರತವನ್ನು ಸರಿಯಾಗಿ ಅರಿಯಲು ಬಯಸುವ ಎಲ್ಲರೂ ಇಂಥ ಲೇಖನಗಳನ್ನು ಓದುವ ಅಗತ್ಯವಿದೆ. ಇವರ ಸಮುದಾಯದ ಮದುವೆಯ ರೀತಿ, ಹೆಣ್ಣು ಹುಟ್ಟಿದರೆ ಸಂತಾನದ ವೃದ್ಧಿಯೆಂಬ ನಂಬಿಕೆ, ಎಲ್ಲೆಲ್ಲೂ ದೇವರಿದ್ದಾನೆ, ಕಾಪಾಡ್ತಾನೆ ಎಂಬ ಅಚಲ ವಿಶ್ವಾಸ... ಇವರಿಗೆ ನೂರು ವರ್ಷವಂತೆ. ಇಂಥವರಿಂದಲೇ ಮಳೆ ಬೆಳೆ ಎಂಬ ನಂಬಿಕೆ ನನ್ನದು.
– ಗುಬ್ಬಚ್ಚಿ ಸತೀಶ್, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.