‘ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ’ ಎಂಬಂತೆ, ರಾಜ್ಯದ ಐಪಿಎಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಗೆರೆ ಗೀಚುವ ಚಿಂತೆ.
ಮುಖ್ಯಮಂತ್ರಿ ರಾಜ್ಯದ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದಾಗ ಅಧಿಕಾರಿಗಳು ಆ ಮಾತುಗಳನ್ನು ಆಲಿಸದೆ ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದುದು ವರದಿಯಾಗಿದೆ (ಪ್ರ.ವಾ. ಜ. 17). ಟಿಪ್ಪಣಿ ಬರೆದುಕೊಳ್ಳಲು ತಮಗೆ ನೀಡಿದ್ದ ಪುಸ್ತಕದಲ್ಲಿ ಚುಕ್ಕಿಯಾಟ, ಗೆರೆ ಗೀಚುತ್ತ ಕಾಲಹರಣ ಮಾಡುವ ಮೂಲಕ ಅಧಿಕಾರಿಗಳು ತಮ್ಮ ಹುದ್ದೆಗೆ ಅವಮಾನ ಮಾಡಿದ್ದಾರೆ.
-ಭರತ ಡಿ.ಎಸ್., ದಂದೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.