ADVERTISEMENT

ಎಲ್ಲರಿಗೂ ಹತ್ತಿರವಾಗಲಿ

ಮನೋಹರ ಜೋಶಿ, ಬೆಂಗಳೂರು
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಅಂಚೆ ಇಲಾಖೆಯು ‘ಅಜ್ಜ ನೆಟ್ಟ ಆಲದ ಮರ’ ಎಂಬ ತತ್ವದಿಂದ ಹೊರಬಂದು ಈಚಿನ ದಿನಗಳಲ್ಲಿ ಸಂಪೂರ್ಣ ಗಣಕೀಕೃತಗೊಳ್ಳುತ್ತಿರುವುದು ನಿಜವಾಗಲೂ ಸಾಧನೆ ಮತ್ತು ಸ್ವಾಗತಾರ್ಹ. ಇದರಿಂದ ಗ್ರಾಹಕರಿಗೆ ದೇಶದ ಯಾವುದೇ ಮೂಲೆಯಿಂದಲೂ ತ್ವರಿತ ಅಂಚೆ ವ್ಯವಹಾರ ಸಾಧ್ಯವಾಗುತ್ತಿದೆ. ಜೊತೆಗೆ ಎಲ್ಲ ವರ್ಗದ ಗ್ರಾಹಕರಿಗೂ ಹತ್ತಿರವಾಗುತ್ತಿದೆ.

ಈಗಾಗಲೇ ದೇಶದ ಕೆಲವೆಡೆ ‘ಅಂಚೆ ಎಟಿಎಂ’ ಕೇಂದ್ರಗಳು ಸೇವೆ ಆರಂಭಿಸಿವೆ. ಆದರೆ ಇಂಥ ಎಲ್ಲ ಸೌಲಭ್ಯಗಳೂ ಕೇವಲ ನಗರ, ಪಟ್ಟಣಗಳಿಗಷ್ಟೇ ಸೀಮಿತವಾಗದೆ ಹಳ್ಳಿಹಳ್ಳಿಗಳ ಅಂಚೆ ಕೇಂದ್ರಗಳೂ ಗಣಕೀಕೃತಗೊಂಡರೆ ಕೇಂದ್ರ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.