ADVERTISEMENT

ಕಸ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2014, 19:30 IST
Last Updated 25 ಆಗಸ್ಟ್ 2014, 19:30 IST

ನವರಂಗ್ ವೃತ್ತದಿಂದ ಶ್ರೀರಾಮಪುರದವರೆಗಿನ ಕುವೆಂಪು ರಸ್ತೆಯ ಮೆಟ್ರೊ ಸೇತುವೆಯ ಕೆಳಗೆ ಮನೆಗಳ ಕಟ್ಟಡದ ತ್ಯಾಜ್ಯ ಹಾಗೂ ಕಸಕಡ್ಡಿಗಳನ್ನು ಹಾಕುತ್ತಿದ್ದು, ಇದೊಂದು ಕಸದ ತಿಪ್ಪೆಯಾದಂತಿದೆ.

ಇದರ ಕೆಳಗೆ ಬೆಳೆಸಿದ ಹೂವಿನ ಗಿಡಗಳು ಸರಿಯಾದ ಆರೈಕೆ ಇಲ್ಲದೆ ಒಣಗುತ್ತಿವೆ. ಆದ್ದರಿಂದ ತಕ್ಷಣ ಕಸ ತೆರವುಗೊಳಿಸುವುದಲ್ಲದೆ, ಕಾಲಕಾಲಕ್ಕೆ ಗಿಡಗಳಿಗೆ ನೀರು ಹಾಕಿ ಪೋಷಿಸುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಮನವಿ.
–ಜೆ.ಆರ್‌. ಆದಿನಾರಾಯಣಮುನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT