ADVERTISEMENT

ಕಸ ವಿಲೇವಾರಿ ಮಾಡಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 26 ಜನವರಿ 2015, 19:30 IST
Last Updated 26 ಜನವರಿ 2015, 19:30 IST
ಕಸ ವಿಲೇವಾರಿ ಮಾಡಿ
ಕಸ ವಿಲೇವಾರಿ ಮಾಡಿ   

ಗಾಂಧಿನಗರದ ಸಿಂಡಿಕೇಟ್‌ ಬ್ಯಾಂಕ್‌ ರಸ್ತೆ ಹಾಗೂ ಸುಖ ಸಾಗರ್‌ ಹೋಟೆಲ್‌ ಹಿಂಭಾಗದಲ್ಲಿರುವ  ರಸ್ತೆಯಲ್ಲಿ ಬಹಳ ದಿನಗಳಿಂದ ಕಸ ವಿಲೇವಾರಿ ಆಗದೆ ಪಾದಚಾರಿಗಳಿಗೆ ಹಾಗೂ ಇತರೆ ಜನಗಳಿಗೆ ತೊಂದರೆ ಆಗುತ್ತಿದೆ. ಈ ಸಮಸ್ಯೆ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ದಿನವೂ ಬರುವ ಕಸ ವಿಲೇವಾರಿ ವಾಹನಗಳು ಅರ್ಧ ಕಸವನ್ನು ಮಾತ್ರ ತುಂಬಿಕೊಂಡು ಉಳಿದ ಕಸವನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದು ಗೊತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಇತ್ತ ಗಮನ ಹರಿಸಿ, ಈ ಸ್ಥಳದಲ್ಲಿ ಬೀಳುವ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿಸಿ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.