ADVERTISEMENT

ಕೆಟ್ಟ ಸಂದೇಶ...

ಶ್ರಿನಿವಾಸ ಕಾರ್ಕಳ, ಮಂಗಳೂರು
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಪ್ರತಿಭಟನೆಯ ಅಸ್ತ್ರವಾಗಿ ಕಾಗದ ಪತ್ರಗಳನ್ನು ಹರಿದೆಸೆದು ವೀರಾವೇಶ ಪ್ರದರ್ಶಿಸುವ ಕೆಟ್ಟ ಸಂಪ್ರದಾಯವೊಂದು ರಾಜ್ಯದ ಶಾಸನಸಭೆಯಲ್ಲಿ ಹೆಚ್ಚುತ್ತಿರುವುದು ನಿಜಕ್ಕೂ ವಿಷಾದದ  ಸಂಗತಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವುದಕ್ಕೆ ಅಸಂಖ್ಯ ಸಭ್ಯ ಮತ್ತು ಸುಸಂಸ್ಕೃತ ಮಾರ್ಗಗಳಿದ್ದು ಅಂತಹ ಮಾರ್ಗವನ್ನು ಅನುಸರಿಸುವ ಮೂಲಕ ಜನಪ್ರತಿನಿಧಿಗಳು ಮಾದರಿಯಾಗುವಂತಹ ನಡವಳಿಕೆಗಳನ್ನು ಪ್ರದರ್ಶಿಸಬೇಕು ಎಂದು ಜನರೂ ಅಪೇಕ್ಷಿಸುತ್ತಾರೆ. ದೇಶದಲ್ಲಿ ಸ್ವಚ್ಛ ಭಾರತ ಆಂದೋಲನ ಕಾವು ಪಡೆದುಕೊಂಡಿದ್ದು, ಕಸ ನಿರ್ಮೂಲನದ ಜತೆಗೆ ಕಸಸೃಷ್ಟಿಯನ್ನು ತಡೆಯುವುದೂ ಇದರ ಒಂದು ಭಾಗವಾಗಿರುವಾಗ ನಮ್ಮ  ಜನಪ್ರತಿನಿಧಿಗಳು ಕಾಗದಪತ್ರಗಳನ್ನು ಹರಿದೆಸೆದು ಶಾಸನಸಭೆಯಲ್ಲೂ ಕಸ ಸೃಷ್ಟಿಸುವ ಮೂಲಕ ಹಾಕಿಕೊಡುತ್ತಿರುವ ಮಾದರಿಯಾದರೂ ಎಂತಹದು? ಶಾಸನಸಭೆಯ ಸದಸ್ಯರ ಇಂತಹ ನಡವಳಿಕೆ ಸಮಾಜಕ್ಕೆ ಕೆಟ್ಟ ಸಂದೇಶವೊಂದನ್ನು ಕಳುಹಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.