ADVERTISEMENT

ಕ್ಯಾಂಟೀನ್‌ ತೆರೆಯಿರಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST

ಸರ್ಕಾರಿ ವಿಶ್ರಾಂತಿ ಗೃಹ ಬಳಸುವುದು, ಕಾರು ಖರೀದಿ, ರೈಲಿನಲ್ಲಿ ಪ್ರಯಾಣಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸರ್ಕಾರ ರಿಯಾಯಿತಿ ಸೌಲಭ್ಯ ಕಲ್ಪಿಸಿರುತ್ತದೆ.

ಹಾಗೆಯೇ ಸೈನಿಕರು ಹಾಗೂ ಪೊಲೀಸರ ಕುಟುಂಬಗಳಿಗೆ ಅನುಕೂಲವಾಗುವಂತೆ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಕ್ಯಾಂಟೀನ್‌ಗಳನ್ನು (ಮಳಿಗೆ) ತೆರೆಯಲಾಗಿದೆ. ಆದರೆ ಮಳೆ ಬೆಳೆ ಇಲ್ಲದೆ ತತ್ತರಿಸುತ್ತಿರುವ, ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ನಲುಗುವ ರೈತರಿಗೆ ಮಾತ್ರ ಇಂತಹ ಯಾವುದೇ ಅನುಕೂಲಗಳಿಲ್ಲ.

ಜೀವನಾವಶ್ಯಕ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ಯಾಂಟೀನ್‌ಗಳನ್ನು ತೆರೆಯಲು ಸರ್ಕಾರ ಮನಸ್ಸು ಮಾಡಬೇಕು.
-ಅಪ್ಪು ಮ. ಶಿರೋಳಮಠ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT