‘ಮಗಳ ಸಾಧನೆಯಲ್ಲಿ ಗುಳೆಯ ನೋವು ಮರೆತರು’ ವರದಿಯನ್ನು (ಪ್ರ.ವಾ., ನ.12) ಓದಿ ಸಂತೋಷವಾಯಿತು. ಬಾದಾಮಿ ತಾಲ್ಲೂಕಿನ ಹನಾಪುರದಿಂದ ಗೋವಾಕ್ಕೆ ಗುಳೆ ಹೋಗಿ ಅಲ್ಲಿನ ಹೋಟೆಲ್ ಒಂದರ ಕಾಮಗಾರಿಯಲ್ಲಿ ಕಾರ್ಮಿಕನಾಗಿ ದುಡಿದಿದ್ದ ನೀಲಪ್ಪ ದುರ್ಗದ ಅವರ ಮಗಳು ತೇಜಸ್ವಿನಿ ದುರ್ಗದ, ಕ್ರಿಕೆಟ್ನಲ್ಲಿ ಸಾಧನೆ ತೋರಿ, ಗೋವಾದ 19 ವರ್ಷದೊಳಗಿನ ಮಹಿಳಾ ತಂಡದ ನಾಯಕಿಯಾಗಿ, ಅದೇ ಹೋಟೆಲ್ನಲ್ಲಿ ವಾಸ್ತವ್ಯ ಮಾಡುವುದು ನಿಜಕ್ಕೂ ಒಂದು ರೋಚಕ ವಿಷಯ.
-ಕೆ.ಎಸ್. ಅಶ್ವತ್ಥನಾರಾಯಣ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.