ADVERTISEMENT

ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸಿ

ತಿಮ್ಮರಾಜು ಎಂ.ಜೆ.
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸಿ
ಗುಂಡಿಬಿದ್ದ ರಸ್ತೆಯನ್ನು ಸರಿಪಡಿಸಿ   

ಬಾಪೂಜಿನಗರ 2ನೇ ಹಂತದಲ್ಲಿ 4ನೇ ಮುಖ್ಯರಸ್ತೆ ರೈಲ್ವೆ ಗೇಟ್‌ ಎದುರು ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಜಲಮಂಡಳಿಯ ಪೈಪುಗಳು ಒಡೆದು ಪದೇಪದೇ ನೀರು ಪೋಲಾಗುತ್ತಿತ್ತು. ಇದನ್ನು ತಡೆಗಟ್ಟಲು ಜಲಮಂಡಳಿಯವರು ಗುಂಡಿಯನ್ನು ತೆರೆದಿದ್ದರು.

ಕೆಲಸ ಮುಗಿದು ಇಷ್ಟು ತಿಂಗಳಾದರೂ ಬಿಬಿಎಂಪಿಯವರು ರಸ್ತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಯವರು, ಅಂಗಡಿಯವರು ದೂಳಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.