ದಿನ ಕಳೆದ ಹಾಗೆಲ್ಲಾ ತಾಲಿಬಾನ್ ಉಗ್ರರು, ಇಸ್ಲಾಮಿಕ್ ಸ್ಟೇಟ್ ಉಗ್ರರು, ಅಲ್ಕೈದಾ ಮುಂತಾದ ನರರಾಕ್ಷಸರ ಉಪಟಳ ಮುಗಿಲು ಮುಟ್ಟುತ್ತಿದೆ; ಭುವಿಗೆ ರಕ್ತದೋಕುಳಿ ಬರೆಯುತ್ತಿದೆ. ಇದೇ ಡಿಸೆಂಬರ್ 16ರಂದು ಪೆಶಾವರದಲ್ಲಿ ಸೈನಿಕ ಶಾಲೆಯ 132 ಮಕ್ಕಳ ಹತ್ಯಾಕಾಂಡ ಕಂಡು ಎದೆ ಬಿರಿಯುತ್ತದೆ, ಕಣ್ಣೀರು ಬತ್ತುತ್ತಿದೆ! ನಾಗರಿಕ ಜಗತ್ತಿನ ಮಾನವ ಸ್ವಾತಂತ್ರ್ಯಕ್ಕೆ ಉಗ್ರರು ಸವಾಲು.
ಯಾವುದೇ ಜಾತಿ, ಜನಾಂಗ, ಧರ್ಮ, ದೇಶ, ಭಾಷೆ, ಬಣ್ಣಗಳ ಮುಲಾಜಿಲ್ಲದೆ ಈ ಅವಿವೇಕಿಗಳ ಹುಟ್ಟಡಗಿಸಲು ಜಾಗತಿಕವಾಗಿ, ಪ್ರತಿಯೊಂದು ದೇಶವೂ ಮತ್ತು ಆಯಾ ದೇಶವಾಸಿ ಪ್ರಜೆಗಳೂ ಪ್ರತಿಜ್ಞೆ ಮಾಡಬೇಕು. ಈಗ ಸರ್ಕಾರಗಳು ನಡೆಸುವ ಕಾರ್ಯಾಚರಣೆಗೆ ಪ್ರಜೆಗಳು ಸಹಕರಿಸಬೇಕು. ಇಲ್ಲವಾದರೆ ಮಾನವತೆಯ ಸರ್ವನಾಶ. ಆದ್ದರಿಂದ,
ಏಳಿ, ಎಚ್ಚರಗೊಳ್ಳಿ!
ವಿರಮಿಸದಿರಿ ಗುರಿಮುಟ್ಟುವತನಕ!
ಈ ಜಾಗತಿಕ ಕರೆಗೆ ಓಗೊಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.