ADVERTISEMENT

ಜಾತಿ ಲೇಪ ಬೇಡ

ವಿ.ಜಿ.ಇನಾಮದಾರ, ವಿಜಯಪುರ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST


ಬಸವಣ್ಣನವರ ಲಿಂಗೈಕ್ಯ ದಿನವನ್ನು ಪಂಚಮಸಾಲಿಗಳ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂಬ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಹೇಳಿಕೆ ಸರಿಯಲ್ಲ.

ಬಸವಣ್ಣ ಜಾತಿರಹಿತ, ವರ್ಗರಹಿತ ಸಮಾಜ ಕಟ್ಟಲು ಹೋರಾಡಿದ ಮಹಾನ್‌ ಮಾನವತಾವಾದಿ. ಅಂತಹ ಮಹಾಪುರುಷನನ್ನು ಜಾತಿ ದಿನಾಚರಣೆಗೆ ಬಳಸಿಕೊಳ್ಳುವುದು ಎಷ್ಟು ಸೂಕ್ತ ಎಂದು ಸ್ವಾಮೀಜಿ ಯೋಚಿಸಬೇಕು.

ಹೀಗೆ ಸಮಾಜದ ಎಲ್ಲ ಜಾತಿಗಳೂ ಮಹಾಪುರುಷರು, ಶರಣರು, ಸಂತರ ಲಿಂಗೈಕ್ಕ, ಜಯಂತಿಗಳನ್ನು ಜಾತಿ ದಿನಾಚರಣೆಗಳಿಗೆ ಬಳಸಿಕೊಂಡರೆ ಅವರ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.