ADVERTISEMENT

ಟಿಇಟಿ: ನಿರಂತರ ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2014, 19:30 IST
Last Updated 31 ಆಗಸ್ಟ್ 2014, 19:30 IST

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮೊದಲನೇ ಹಂತವಾಗಿರುವ ಟಿಇಟಿ ಪರೀಕ್ಷೆಯ ಇತ್ತೀಚಿನ ಫಲಿತಾಂಶದ ಸುತ್ತ ಚರ್ಚೆಗಳು ನಡೆ­ಯು­ತ್ತಿವೆ. ನಿಗದಿತ ಅಂಕ ಪಡೆದು ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುವವರ ಸಂಖ್ಯೆ, ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆಗೆ ಹೋಲಿ­ಸಿ­ದರೆ ತೀರಾ ಕಡಿಮೆ ಎಂಬುದು ನಿಜ. ಹಾಗೆಂದು ಟಿಇಟಿ ಪರೀಕ್ಷೆಯ ಔಚಿತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ.

ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿರಂತರ ಅಧ್ಯಯನ ಅಗತ್ಯ. ಈ ಬಾರಿ ಅರ್ಹತೆ ಪಡೆಯಲು ವಿಫಲರಾಗಿರುವವರಿಗೆ ಶಿಕ್ಷಕ­ರಾ­ಗುವ ಅರ್ಹತೆ ಇಲ್ಲ ಎಂದು ಹೇಳಲಾಗು­ವು­ದಿಲ್ಲ. ಇಂದಿನ ಹಲವು ಶಿಕ್ಷಕ ತರಬೇತಿ ಸಂಸ್ಥೆಗಳು ದುಡ್ಡು ಮಾಡುವ ದಂಧೆಗೆ ಇಳಿದಿರುವುದು ಸತ್ಯ­ವಾದರೂ, ಟಿಇಟಿ ಪರೀಕ್ಷೆಯ ಕಳಪೆ ಫಲಿ­ತಾಂಶಕ್ಕೆ ಅಭ್ಯರ್ಥಿಗಳ ನಿರಂತರ ಅಧ್ಯಯ­ನದ ಕೊರತೆಯೇ ಕಾರಣ­ವೆನ್ನಬೇಕು.

ಹೀಗಾಗಿ, ಶಿಕ್ಷಕರಾಗಲು ಬಯಸುವ ಅಭ್ಯರ್ಥಿ­ಗಳು ಟಿಇಟಿ ಪರೀಕ್ಷೆಯ ಅಗತ್ಯವನ್ನೇ ಪ್ರಶ್ನಿಸುವ ಬದಲು, ಸೂಕ್ತ ಅಧ್ಯಯನದ ಮೂಲಕ ಮುಂದಿನ ಅವಕಾಶದಲ್ಲಿ ಯಶಸ್ವಿ ಆಗಬಹುದು.
–ವೆಂಕಟೇಶ ಬಿ.ಎಂ., ಬೆಂಗಳೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.