ADVERTISEMENT

ತ್ಯಾಗಕ್ಕೆ ಅಣಿಯಾಗಿ

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಮೀಸಲಾತಿಯನ್ನು  ಅಧಿಕಾರಸ್ಥರು ಆಮಿಷ ಒಡ್ಡುವ ಒಂದು ರಾಜಕೀಯ ಅಸ್ತ್ರವನ್ನಾಗಿ ಬಳಸಬಹುದೆಂಬ  ಕಾರಣಕ್ಕೆ ಡಾ. ಅಂಬೇಡ್ಕರರು ಮೀಸಲಾತಿಯನ್ನು ಮೊದಮೊದಲು ವಿರೋಧಿಸಿದ್ದರು. ಅವರ ಮನವೊಲಿಸಲಾಯಿತು. 

ಶತಮಾನಗಳಿಂದ ಶೊಷಣೆಗೊಳಗಾಗಿರುವ ಪರಿಶಿಷ್ಟರು ಮತ್ತಿತರ ದಮನಿತರ ಉದ್ಧಾರಕ್ಕೆ ಮೀಸಲಾತಿಯನ್ನು  ಹತ್ತು ವರ್ಷದ ಅವಧಿಗೆ ಜಾರಿಗೊಳಿಸಲಾಯಿತು.

ಆದರೆ ಅರವತ್ತೈದು ವರ್ಷಗಳು ಗತಿಸಿದರೂ ನಿರೀಕ್ಷಿತ ಮಟ್ಟದಲ್ಲಿ ದಲಿತರ ಸ್ಥಿತಿಗತಿ ಸುಧಾರಿಸದೇ ಇರುವುದಕ್ಕೆ ಆ ವರ್ಗದ ಕೆನೆಪದರಿನ ಫಲಾನುಭವಿಗಳ ಪಟ್ಟಭದ್ರ ಹತಾಸಕ್ತಿಯೇ ಮುಖ್ಯ ಕಾರಣ. ಒಂದು ಹಂತ ತಲುಪಿರುವ ಕೆನೆಪದರಿನ ಜನ ತಮ್ಮವರೇ ಆದ ಅವಕಾಶ ವಂಚಿತರಿಗೆ ಮೀಸಲಾತಿಯ ಫಲ ದಕ್ಕುವಂತೆ ತ್ಯಾಗಕ್ಕೆ ಅಣಿಯಾಗಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.