ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಅಂಕಣಕ್ಕೆ ನನ್ನ ಪ್ರತಿಕ್ರಿಯೆ (ಅರ್ಥವಿಚಾರ, ಪ್ರ.ವಾ., ಸೆ.10). ಈ ಬರಹ ಓದಿ ನನಗೆ ಅಚ್ಚರಿ ಆಗಲಿಲ್ಲ. ಕಾರಣ, ಸರ್ಕಾರದ ವಹಿವಾಟು ಎಂದರೆ ಅದು ಕೇವಲ ಹಣಕಾಸೇ, ಎಂದು ಪ್ರತಿಪಾದಿಸಿದವರಲ್ಲಿ ಗೋಪಿನಾಥರೇ ಮೊದಲೇನಲ್ಲ. ಈ ರೀತಿ ಹಣಕಾಸಿನ ನಿಟ್ಟಿನಲ್ಲಿ ಮಾತ್ರವೇ ಯೋಚಿಸುವವರು ‘ಜನರು ದೇಶದ ಸಂಪತ್ತು’ ಎಂಬುದನ್ನು ಒಪ್ಪುವುದಿಲ್ಲ. ಪ್ರವಾಸಿಗಳು, ಅವರ ಕಷ್ಟ ಸುಖಗಳು ದೇಶದ ಸಾಮಾನ್ಯ ಪ್ರಜೆಯ ಬದುಕಿನ ಆದ್ಯತೆಗಿಂತಲೂ ಪ್ರಮುಖ ಎಂಬ ಈ ಬಗೆಯ ನಿಲುವು ಸರಿಯಲ್ಲ. ಇದು ಕೇವಲ ವ್ಯಾಪಾರಿ ನಿಲುವು ಮಾತ್ರ.
ಇಂದು ಪಂಜಾಬಿನಲ್ಲಿ ಮಾದಕ ಪದಾರ್ಥಗಳ ಸೇವನೆ ಹೆಚ್ಚಾಗಿದ್ದು, ಪಂಜಾಬಿನ ಶೇಕಡ ೭೦ರಷ್ಟು ತರುಣರು ದುರ್ವ್ಯಸನಿ
ಗಳಾಗಿದ್ದಾರೆ. ಅಂತೆಯೇ ನಾಗಾಲ್ಯಾಂಡ್ ಮತ್ತು ಮಣಿಪುರದ ಪರಿಸ್ಥಿತಿ ಇದಕ್ಕಿಂತ ಬೇರೆಯೇನಲ್ಲ. ಅದರಿಂದ ದೇಶಕ್ಕೆ ಎಷ್ಟು
ಉತ್ಪಾದನೆ, ಸಂಪತ್ತು ಕಡಿಮೆಯಾಗಿದೆ ಎನ್ನುವುದರ ಬಗ್ಗೆ ಚಿಂತೆಯೇ ಇಲ್ಲ.
ಕೇರಳದಲ್ಲಿ ಕುಡಿತದಿಂದ ಆ ರಾಜ್ಯದ ವರಮಾನ ಎಷ್ಟು ನಷ್ಟವಾಗಿದೆ ಅನ್ನುವುದರ ಬಗ್ಗೆಯೂ ಚಿಂತಿಸುವುದು ಮುಖ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.