ADVERTISEMENT

ದೂಳು ಮುಕ್ತಗೊಳಿಸಿ

ಕಾಡನೂರು ರಾಮಶೇಷ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ಗಾರ್ಡನ್‌ ಸಿಟಿಯಿಂದ ಗಾರ್ಬೆಜ್‌ ಸಿಟಿಯಾದ ಬೆಂಗಳೂರು ಈಗ ಡಸ್‌್ಟಸಿಟಿಯಾಗಿದೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂದಿರುವ ವಿಶ್ವಸಂಸ್ಥೆಯ 2014ರ ವರದಿ ಸರ್ಕಾರ, ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳಲ್ಲಿ ಅರಿವು ಎಚ್ಚರ ಮೂಡಿಸಲಿ. ಬೆಂಗಳೂರಿನಲ್ಲಿ ಸಂಚರಿಸುವ ವಾಹನಗಳ ಅತಿ ಹೊಗೆಯಿಂದ ಹಲವು ಮಂದಿ ಸಾವನ್ನಪ್ಪುತ್ತಿರುವುದು ವಿಪರ್ಯಾಸ. ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಸರಳ ಸುಲಭ ಉಪಾಯ, ಗಿಡಮರಗಳ ಬೆಳಸುವಿಕೆ ಹಾಗೂ ಅವುಗಳ ಮಾರಣಹೋಮ ನಿರಂತರವಾಗಿ ನಡೆದಿದೆ. ವಾಯುಮಾಲಿನ್ಯದಿಂದ ನಗರದ ನಾಗರಿಕರು ನಾನಾ ರೋಗಗಳಿಂದ ನರಳುತ್ತಿದ್ದರೂ ನಗರದ ಜನಪ್ರತಿನಿಧಿಗಳು ಬಿಬಿಎಂಪಿ ಡಸ್‌್ಟಸಿಟಿಯನ್ನು ಗ್ರೀನ್‌ಸಿಟಿ ಮಾಡುವ ಯಾವ ಕ್ರಮವನ್ನೂ ಕೈಗೊಂಡಿಲ್ಲ ಏಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.