ADVERTISEMENT

ಧರ್ಮ ರಾಜಕಾರಣದ ಪರಮಾವಧಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಬಗ್ಗೆ ರಾಜ್ಯದ ಶಿಫಾರಸನ್ನು ಕೇಂದ್ರ ಸರ್ಕಾರ ಪರಿಗಣಿಸುವುದು ಅಥವಾ ಬಿಡುವುದು ಬೇರೆ ವಿಚಾರ. ಆದರೆ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದು ಮಾತ್ರ ಖಂಡನೀಯ.

‘ಬಿಜೆಪಿಯವರದ್ದು ಧರ್ಮರಾಜಕಾರಣ’ ಎಂದು ಸಿದ್ದರಾಮಯ್ಯ ಹಲವು ಬಾರಿ ಟೀಕಿಸಿದ್ದಿದೆ. ಆದರೆ ಅವರೇ ಈಗ ವೋಟಿಗಾಗಿ ಧರ್ಮದ ವ್ಯಾಪಾರಕ್ಕೆ ಇಳಿದಿದ್ದಾರೆ. ಹಿಂದೂ ಧರ್ಮವನ್ನು ಒಡೆಯುವ ಮೂಲಕ ಸಿದ್ದರಾಮಯ್ಯ, ದೇಶದ ಅಖಂಡತೆಯನ್ನು ನಾಶಮಾಡಲು ಹೊರಟಿದ್ದಾರೆ. ಇದು ಧರ್ಮರಾಜಕಾರಣದ ಪರಮಾವಧಿ ಅಲ್ಲವೇ?

-ಎಸ್‌. ಚಂದ್ರಶೇಖರ ಸೋಮಯಾಜಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.