ಇಂದು ನಮ್ಮ ದೇಶ ಒಬ್ಬ ಮಾಜಿ ರಾಷ್ಟ್ರಪತಿಯನ್ನು ಕಳೆದುಕೊಂಡಿದೆ. ಆದರೆ ನಾನು ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಪ್ರೇರಣಾ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಅಬ್ದುಲ್ ಕಲಾಂ ಅವರು ಬರೆದ ‘ವಿಂಗ್ಸ್ ಆಫ್ ಫೈರ್’ ಪುಸ್ತಕವನ್ನು ಓದದಿದ್ದರೆ ಬಹುಶಃ ನಾನು ನಕ್ಸಲೀಯ ಅಥವಾ ತೀವ್ರಗಾಮಿ ಆಗಿರುತ್ತಿದ್ದೆ.
ನನ್ನ ಪಿಎಸ್ಐ ಲಿಖಿತ ಪರೀಕ್ಷೆಯಲ್ಲಿನ ನಿಬಂಧ ಬರಹದಲ್ಲಿ ಕಲಾಂ ‘ಎಂಪ್ಲಾಯ್ಮೆಂಟ್ ನ್ಯೂಸ್’ನಲ್ಲಿ ಬರೆದ ಹೇಳಿಕೆಯನ್ನೇ ಪ್ರಸ್ತಾಪಿಸಿ ಬರೆದಿದ್ದೆ. ಆ ಬರಹಕ್ಕೆ ಅತಿ ಹೆಚ್ಚಿನ ಅಂಕಗಳು ಬಂದಿದ್ದವು. ನನ್ನಂತೆ ಲಕ್ಷಾಂತರ ಯುವಕರು, ಮಕ್ಕಳು ಕಲಾಂರಿಂದ ಪ್ರೇರಣೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.