ADVERTISEMENT

ಪುನಃ ಸಂಚರಿಸಲಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ವಿಜಯಪುರ ನಗರದಲ್ಲಿ ನಿರ್ದಿಷ್ಟಪಡಿಸಿದ ದಿನಗಳಂದು, ನಿರ್ದಿಷ್ಟಪಡಿಸಿದ ವೇಳೆಯ ಪ್ರಕಾರ ವಿವಿಧ ಬಡಾವಣೆಗಳಲ್ಲಿ  ಸಂಚಾರಿ ಗ್ರಂಥಾಲಯದ ವ್ಯವಸ್ಥೆಯನ್ನು ಗ್ರಂಥಾಲಯ ಇಲಾಖೆ ಕಲ್ಪಿಸಿಕೊಟ್ಟಿತ್ತು. ಇದರಿಂದಾಗಿ ಗೃಹಿಣಿಯರಿಗೆ, ಮಕ್ಕಳಿಗೆ, ಅಸಹಾಯಕರಿಗೆ, ನಿವೃತ್ತರಿಗೆ, ವಯೋವೃದ್ಧರಿಗೆ ತಮ್ಮ ಜ್ಞಾನದ ಹಸಿವೆಯನ್ನು ನೀಗಿಸಿಕೊಳ್ಳಲು ತುಂಬಾ ಉಪಯುಕ್ತವಾಗಿತ್ತು ಮತ್ತು ಗ್ರಂಥಾಲಯ ಇಲಾಖೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.

ಆದರೆ ಹಲವು ವರ್ಷಗಳಿಂದ ಈ ಸೌಲಭ್ಯವು ಏಕಾಏಕಿ ಸಕಾರಣವಿಲ್ಲದೆ ಸ್ಥಗಿತಗೊಂಡಿದೆ. ಆದಕಾರಣ ನಾಗರಿಕರಿಗೆ ಗ್ರಂಥಾಲಯ ಇಲಾಖೆಯ ಬಗ್ಗೆ ಬೇಸರ ಮೂಡಿದೆ. ಮುಂಜಾವಿನ ನಿರಂತರ ಕೆಲಸದ ಮಧ್ಯೆಯೂ ನಾಗರಿಕರು ಗುಂಪುಗುಂಪಾಗಿ ಪುಸ್ತಕ ಬದಲಾವಣೆಗಾಗಿ ಬಸ್‌ ಬರುವ ಮುಂಚೆಯೇ ಬಸ್‌ ದಾರಿ ಕಾಯುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಸಂಚಾರಿ ಗ್ರಂಥಾಲಯ ಪುನಃ ಸಂಚರಿಸಲಿ. ಗ್ರಂಥಾಲಯ ಇಲಾಖೆ, ಜಿಲ್ಲಾ ಆಡಳಿತ, ಜನಪ್ರತಿನಿಧಿಗಳು ಇದರ ಅಗತ್ಯವನ್ನು ಮನಗಾಣಬೇಕು. ನಾಗರಿಕರ ಜ್ಞಾನದ ಹಸಿವು ನೀಗಿಸುವ ಈ ಮಹಾಕಾರ್ಯಕ್ಕೆ ಕೈಜೋಡಿಸಬೇಕು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.