ಪ್ರಿಯ ಸೋನು ಅವರೇ,
ನಮ್ಮ ಕುವೆಂಪು ಮಾತೊಂದಿದೆ
‘ಆವುದಾಗಲಿ ನೆಪ
ಫಲದಾಯಕವಾಗಲಿ ತಪ’
ಹಾಗಾಗಿ ‘ಬಾಂಗ್’ ನೆಪದಲ್ಲಿ
ಬೆಳಗಿನ ಜಾವ ಎದ್ದುಬಿಡಿ
ಎದ್ದು ಕಿರಿಕಿರಿಯ ಭಾವನೆಯ
ತೊರೆದುಬಿಡಿ.
ಎರಡು ನಿಮಿಷದ ಸದ್ದು
ಮೂರೂ ಹೊತ್ತನ್ನು ಹಾಳುಮಾಡಿತೆಂದು
ಹೇಳದಿರಿ,
ಪರರಲ್ಲಿ ಹೇರದಿರಿ.
-ಜೆ.ಬಿ. ಮಂಜುನಾಥ, ಪಾಂಡವಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.