ADVERTISEMENT

ಬದಲಾಗುತ್ತಿದೆ ಆದ್ಯತೆ

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 30 ಮೇ 2016, 19:30 IST
Last Updated 30 ಮೇ 2016, 19:30 IST

ಕಳೆದ ಕೆಲವು ದಶಕಗಳಿಂದ ಸಿಇಟಿ, ಕಾಮೆಡ್ ಕೆ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ರ್‍ಯಾಂಕ್ ಗಳಿಸಿದ ಬಹುತೇಕ ವಿದ್ಯಾರ್ಥಿಗಳ ಕನಸು, ವೈದ್ಯಕೀಯ ಇಲ್ಲವೇ ತಾಂತ್ರಿಕ ಶಿಕ್ಷಣ ಪಡೆಯುವುದೇ ಆಗಿರುತ್ತಿತ್ತು.

ಆದರೆ ಈ ವರ್ಷದ ಅನೇಕ ವಿದ್ಯಾರ್ಥಿಗಳು ಮೂಲ ವಿಜ್ಞಾನ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಇತ್ಯಾದಿ ಕ್ಷೇತ್ರಗಳತ್ತ ಆಸಕ್ತಿ ತೋರಿರುವುದು ಕಂಡುಬಂದಿದೆ.ಅಂತೂ ಕೇವಲ ಒಂದೇ ಕ್ಷೇತ್ರದತ್ತ ವಾಲುತ್ತಿದ್ದ ಯುವಜನರ ಮನಸ್ಸು ಭವಿಷ್ಯದ ಅಗತ್ಯಗಳನ್ನು ಪರಿಗಣಿಸುತ್ತಿರುವುದು ಶ್ಲಾಘನೀಯ. ಐಟಿ, ಬಿಟಿ, ವೈದ್ಯಕೀಯದ ಹೊರತಾಗಿಯೂ ಅನ್ಯ ಕ್ಷೇತ್ರಗಳು ಪ್ರಸಿದ್ಧಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.