‘ಕೊರೆತ’ಕ್ಕೆ ಬ್ರೇಕ್ ಹಾಕದಿದ್ದರೆ... (ಸಂಗತ, ಪಾರ್ವತಿ ಪಿಟಗಿ, ಜ. 27).
‘ಕಾಲೋ ಜಗದ್ಭಕ್ಷಕಃ’ (ಕಾಲ ಲೋಕವನ್ನು ನುಂಗುವವನು) ಎಂಬುದು ಆರ್ಷೇಯ ಸೂಕ್ತಿ. ಇರಬಹುದು. ಆದರೆ ಕೆಲವರು ಪುಣ್ಯಾತ್ಮರು ಭಾಷಣಕ್ಕೆ ನಿಂತರೆ, ಭೀಷಣ. ಕಾಲ ಭಕ್ಷಕರು! (ಎದುರು ಕುಳಿತವರು ಲಕ್ಷ್ಯಕ್ಕಿಲ್ಲದ ‘ಭಿಕ್ಷುಕ’ರು).
ಕೆಲವೊಮ್ಮೆ ಶ್ರೋತೃಗಳು ಕಣ್ಣು ಮುಚ್ಚಿ (ಅಥವಾ ತೆರೆದುಕೊಂಡು) ಭಾಷಣದಲ್ಲಿ ತನ್ಮಯರಾದಂತೆ ತೋರುತ್ತಾರೆ; ಆದರೆ ವಾಸ್ತವವಾಗಿ ನಿಶ್ಚೇಷ್ಟಿತರಾಗಿರುತ್ತಾರೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.