ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದು ಒಂದು ವಾರ ಕಳೆದರೂ ಇನ್ನೂ ಮೌಲ್ಯಮಾಪಕರಿಗೆ ಬರಬೇಕಾದ ಭತ್ಯೆ ಬಂದಿಲ್ಲ. ಪ್ರತಿ ವರ್ಷ ಕೊನೆಯ ದಿನದಂದೆ ಚೆಕ್ ವಿತರಿಸುತ್ತಿದ್ದರು. ಈ ವರ್ಷ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದು ಖಾತೆ ಸಂಖ್ಯೆ ಪಡೆದಿದ್ದಾರೆ.
ಯಾವಾಗ ಹಣ ಬರುವುದೋ ಎಂಬ ಚಿಂತೆ ಅನುದಾನ ರಹಿತ, ಅನುದಾನಿತ ಶಾಲೆಯ ಶಿಕ್ಷಕರದ್ದಾಗಿದೆ. ಅವರ ವೇತನವೂ ತಿಂಗಳಿಗೆ ಸರಿಯಾಗಿ ಆಗುವುದಿಲ್ಲ. ಈ ಹಣ ಬರುವುದೂ ವಿಳಂಬವಾಗಿದೆ. ಪ್ರೌಢ ಶಿಕ್ಷಣ ಮಂಡಳಿ ಶಿಕ್ಷಕರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಡಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.