ADVERTISEMENT

ಯಾರ ಸಾಲ ಮನ್ನಾ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಕೃಷಿ ಉತ್ಪನ್ನಗಳ ಬೆಲೆ ಇಳಿಕೆಯ ಪರಿಣಾಮವಾಗಿ ರೈತರ ಸಾಲ ಮನ್ನಾಕ್ಕೆ ಕೂಗು ಕೇಳಿಬರುತ್ತಿದೆ. ಕಳೆದ ಬಾರಿ ಸಾಲ ಮನ್ನಾ ಮಾಡಿದಾಗ, ಕೃಷಿ ಸಾಲ ಪಡೆದು ಅದನ್ನು ಬೇರೆ ವ್ಯವಹಾರಗಳಲ್ಲಿ ತೊಡಗಿಸಿದ ಎಷ್ಟೋ ಸರ್ಕಾರಿ ಶಿಕ್ಷಕರು ಮತ್ತು ನೌಕರರು ಸಾಲ ಮನ್ನಾದ ಸುಖ ಅನುಭವಿಸಿದರು! ಸರ್ಕಾರ ಈಗಲೂ ಅದೇ ತಪ್ಪು ಮಾಡದೆ ನಿಜವಾಗಲೂ ಕಷ್ಟದಲ್ಲಿರುವ, ಬೇರೆ ಯಾವುದೇ ಮೂಲಗಳಿಂದ ಆದಾಯವಿರದ ರೈತರನ್ನು ಗುರುತಿಸಿ ಅವರ ಸಾಲವನ್ನಷ್ಟೇ ಮನ್ನಾ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.