ಇಗ್ಗಲೂರು – ಸೂರ್ಯ ಸಿಟಿ, ಸೂರ್ಯ ಸಿಟಿಯಿಂದ ಇಗ್ಗಲೂರು ಬಸ್ಸ್ಟಾಪ್ಗೆ ಹೋಗಲು ಸರಿಯಾದ ದಾರಿಯಿಲ್ಲ. ಚರಂಡಿ ಹಾಳುಬಿದ್ದಿದೆ. ಕೊಚ್ಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ.
ವೃದ್ಧರು, ಹೆಂಗಸರು, ಶಾಲೆಗೆ ಹೋಗುವ ಮಕ್ಕಳು ಇವರೆಲ್ಲರೂ ಇಲ್ಲಿಯೇ ಓಡಾಡಬೇಕು. ಇಲ್ಲಿಯೇ ಶಾಲಾ ಕಾಲೇಜು ವಾಹನಗಳು, ಜೀಪು, ಲಾರಿ, ನೀರು ಸರಬರಾಜು ಮಾಡುವ ವಾಹನಗಳು ಓಡಾಡುತ್ತವೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿ ವಿನಂತಿ.
-ಎಸ್. ವಿ. ಕೃಷ್ಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.